ಬಾಲಕನಾಗಿ ಬಂದಾ ನೋಡು



ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ತುಂಗಾ ತೀರದಿ ಬಾಲಕ್ರಿಷ್ಣನು
ಕೊಳಲನೂದಲು ಮೋಹಗೊಂಡನು
ಎಲ್ಲ ಮರೆತು ಉಲ್ಲಾಸದಿಂದಲಿ
ಕಾಣಲೆಂದು ಓಡೋಡಿ ಬಂದನು

ಸಂಧ್ಯೆಯು ಆರತಿ ಎತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ರಾಘವೇಂದ್ರನ ಕಂಡ ಮುಕುಂದ
ಇಬ್ಬರ ಮನದಲು ಬಲು ಆನಂದ
ಒಬ್ಬರನೊಬ್ಬರು ಅಪ್ಪಿ ನಲಿದರು
ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ
ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ
ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ಸಾಹಿತ್ಯ: ಚಿ. ಉದಯಶಂಕರ



No comments:

Post a Comment