ರಚನೆ : ಸತೀಶ ತುಮಕೂರು
ಸತ್ಯವನೆ ನುಡಿಯುವುದು ಕಷ್ಟವೆಂದೆನಿಸುವುದು
ಸುಳ್ಳ ನುಡಿವುದದು ಸಲಭವೆಂದು ತೋರುವುದು
ಸತ್ಯದ ನುಡಿಗಳವು ಔಷದಿಯ ತೆರದಿ ಕಹಿಯೂ
ಸಿಹಿಯ ಸವಿದಂತೆ ಅನಿಪುದು ಸುಳ್ಳಿನ ನುಡಿಯೂ
ಸತ್ಯವನು ನುಡಿಯುವುದು ಕಠಿಣವೆಂದೆನಿಸಿದರು
ಪಾಲಿಸಿದವರಿದನು ಸಾಧನೆಯಲಿ ಮೇಲೇರುವರು
ಸುಳ್ಳು ಎಂಬುದದು ಕಾಣಿಸದ ನೀರಿನ ಸುಳಿಯಂತೆ
ಸುಳ್ಳನಾಡದಿರೆ ಜೀವನದಿ ಹೊಂದುವೆ ನೀ ನಿಶ್ಚಿಂತೆ
ಸತ್ಯದ ಹಾದಿಯ ಬಿಡದೆ ಬಾಳುವೆಯನು ನೀ ನಡೆಸಿದರೆ
ಕಷ್ಟದಲೂ ಕೈಹಿಡಿದು ಶ್ರೀನರಸಿಂಹ ನೀಡುವ ನಿನಗಾಸರೆ
ಸತ್ಯವನೆ ನುಡಿಯುವುದು ಕಷ್ಟವೆಂದೆನಿಸುವುದು
ಸುಳ್ಳ ನುಡಿವುದದು ಸಲಭವೆಂದು ತೋರುವುದು
ಸತ್ಯದ ನುಡಿಗಳವು ಔಷದಿಯ ತೆರದಿ ಕಹಿಯೂ
ಸಿಹಿಯ ಸವಿದಂತೆ ಅನಿಪುದು ಸುಳ್ಳಿನ ನುಡಿಯೂ
ಸತ್ಯವನು ನುಡಿಯುವುದು ಕಠಿಣವೆಂದೆನಿಸಿದರು
ಪಾಲಿಸಿದವರಿದನು ಸಾಧನೆಯಲಿ ಮೇಲೇರುವರು
ಸುಳ್ಳು ಎಂಬುದದು ಕಾಣಿಸದ ನೀರಿನ ಸುಳಿಯಂತೆ
ಸುಳ್ಳನಾಡದಿರೆ ಜೀವನದಿ ಹೊಂದುವೆ ನೀ ನಿಶ್ಚಿಂತೆ
ಸತ್ಯದ ಹಾದಿಯ ಬಿಡದೆ ಬಾಳುವೆಯನು ನೀ ನಡೆಸಿದರೆ
ಕಷ್ಟದಲೂ ಕೈಹಿಡಿದು ಶ್ರೀನರಸಿಂಹ ನೀಡುವ ನಿನಗಾಸರೆ
No comments:
Post a Comment