ರಚನೆ : ಸತೀಶ ತುಮಕೂರು
ಕಣ್ಣಿಗೆ ಕಾಣನೆನುತ ದೇವನಿರುವಿಕೆಯನೆ ಸುಳ್ಳೆನ್ನದಿರು
ನಿರಾಕಾರ ಶಕ್ತಿಗೇಕೆ ಮೂರ್ತಿ ರೂಪವೆಂದು ಕೇಳದಿರು
ಪೂಜೆ,ಹೋಮ,ಹವನಗಳಿಂದೇನುಪಯೋಗವೆನ್ನದಿರು
ಸ್ವಪ್ರಯತ್ನದಿಂದಲೆಲ್ಲ, ದೈವದ್ದೇನಿಲ್ಲವೆಂದು ಹೇಳದಿರು
ವಾಯುವಿನಿರುವಿಕೆ ಕಾಣದಿರೆ ಅನುಭವಕೆ ಬರದೇನು
ದೈವದಿರುವಿಕೆ ಅಂತೆ ಅನುಭವದಿ ಕಾಣಬೇಕು ನೀನು
ಮನಸ ಏಕಾಗ್ರತೆಗೆ ಪೂಜೆ,ಹೋಮ,ಹವನಗಳು ಬೇಕು
ನಿರಾಕಾರದೆಡೆ ಮನಸನೊಯ್ಯೆ ಮೂರ್ತಿ ರೂಪವು ಬೇಕು
ಶೀತಲತೆಯಿಂದಾಗಿ ಜಲವು ಘನದ ರೂಪದಲಿ ತೋರುವ ತೆರದಿ
ಭಕ್ತಿಗೆ ಮೆಚ್ಚಿ ಶ್ರೀ ನರಸಿಂಹ ತೋರುವ ಭಕ್ತರಿಗೆ ಸಾಕಾರ ರೂಪದಿ
ಕಣ್ಣಿಗೆ ಕಾಣನೆನುತ ದೇವನಿರುವಿಕೆಯನೆ ಸುಳ್ಳೆನ್ನದಿರು
ನಿರಾಕಾರ ಶಕ್ತಿಗೇಕೆ ಮೂರ್ತಿ ರೂಪವೆಂದು ಕೇಳದಿರು
ಪೂಜೆ,ಹೋಮ,ಹವನಗಳಿಂದೇನುಪಯೋಗವೆನ್ನದಿರು
ಸ್ವಪ್ರಯತ್ನದಿಂದಲೆಲ್ಲ, ದೈವದ್ದೇನಿಲ್ಲವೆಂದು ಹೇಳದಿರು
ವಾಯುವಿನಿರುವಿಕೆ ಕಾಣದಿರೆ ಅನುಭವಕೆ ಬರದೇನು
ದೈವದಿರುವಿಕೆ ಅಂತೆ ಅನುಭವದಿ ಕಾಣಬೇಕು ನೀನು
ಮನಸ ಏಕಾಗ್ರತೆಗೆ ಪೂಜೆ,ಹೋಮ,ಹವನಗಳು ಬೇಕು
ನಿರಾಕಾರದೆಡೆ ಮನಸನೊಯ್ಯೆ ಮೂರ್ತಿ ರೂಪವು ಬೇಕು
ಶೀತಲತೆಯಿಂದಾಗಿ ಜಲವು ಘನದ ರೂಪದಲಿ ತೋರುವ ತೆರದಿ
ಭಕ್ತಿಗೆ ಮೆಚ್ಚಿ ಶ್ರೀ ನರಸಿಂಹ ತೋರುವ ಭಕ್ತರಿಗೆ ಸಾಕಾರ ರೂಪದಿ
No comments:
Post a Comment