ದೇಹವೆನ್ನುವ ಮಾಯೆ (ಶ್ರೀನರಸಿಂಹ 11)
ರಚನೆ : ಸತೀಶ್ ತುಮಕೂರು
ರಚನೆ : ಸತೀಶ್ ತುಮಕೂರು
ಕಳೆದು ಹೋಗುತಿಹುದಾಯುಷ್ಯ ದೇಹದಾರೈಕೆಯಲಿ
ದೇಹವನೇ ತಾನೆಂದು ಭ್ರಮಿಸುತ ಮೂಡತೆಯಲಿ
ಶಾಶ್ವತವಲ್ಲದ ದೇಹವಿದೆಂಬುದನು ಮರೆಯುತಲಿ
ಲೌಕಿಕದಿ ಮುಳುಗಿಹೆವು ಸುಖ ಪಡೆವ ಬ್ರಾಂತಿಯಲಿ
ದೇಹವೆಂಬುದು ಭವಸಾಗರದಲಿ ದೋಣಿಯ ತೆರದಿ
ಮನಸು, ಬುದ್ದಿಗಳು ಆದ ನಡೆಸುವ ಹುಟ್ಟಿನೋಪಾದಿ
ದೇವ ನೀಡಿರುವ ಈ ದೇಹ ಸಾಧನೆಗಾಗಿಯೆ ಎಂದು
ಹೊರಗಿಲ್ಲ ಸುಖ, ನೆಮ್ಮದಿ ಕಾಣು ನೀ ಒಳಗೆ ಬಂದು
ಬಾಳ್ವೆಯ ನಡೆಸಬೇಕು ಕೆಸರಿನಲುದ್ಬವಿಪ ಕಮಲ ನೀನಾಗಿ
ನಂಬು ಭವದ ಸಾಗರ ದಾಟಿಸುವ ಶ್ರೀನರಸಿಂಹ ಅಂಬಿಗನಾಗಿ

No comments:
Post a Comment