ಅಜ್ಞಾನದಂದಕಾರ (ಶ್ರೀ ನರಸಿಂಹ 60)


ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ
ಅಜ್ಞಾನವೆಮ್ಮ  ನಿಜ ಸ್ವರೂಪವನು ಮುಸುಕಿಹುದಂತೆ
ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ
ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ

ಮುಚ್ಚಿದ  ಮೋಡ ಸರಿಯೆ  ರವಿಯು ಪ್ರಕರಿಸುವಂತೆ
ಅಜ್ಞಾನ ಕಳೆಯಲೆಮ್ಮ ನಿಜ  ಸ್ವರೂಪದ  ಅರಿವಂತೆ
ಮೋಡವನು ಸರಿಸೆ ವಾಯುವೆಂಬುದು ಬೇಕಿಹುದು
ಅಜ್ಞಾನವದು ಕಳೆಯೆ  ಭಕ್ತಿಯೆನುವುದೆ ಸಾಕಿಹುದು

ಅಜ್ಞಾನದಂದಕಾರದಿ ಮುಳುಗಿ ತೊಳಲಾಡುತಿಹುದು ಮನಸು
ಜ್ಞಾನದ ಬೆಳಕ ನೀಡುತಲಿ ಶ್ರೀ ನರಸಿಂಹ ನೀ ನಮ್ಮ ಹರಸು

No comments:

Post a Comment