ಹೆಣ್ಣು, ಹೊನ್ನು, ಮಣ್ಣಿನ ಮಾಯೆ (ಶ್ರೀನರಸಿಂಹ 10)
ರಚನೆ : ಸತೀಶ್ ತುಮಕೂರು
ರಚನೆ : ಸತೀಶ್ ತುಮಕೂರು
(SRI NARASIMHA , AVALAGUDDA)
ಹೆಣ್ಣು, ಮಣ್ಣು, ಹೊನ್ನಿನಲ್ಲಿಯೆ ಸುಖವಿಹುದೆಂದೆಣಿಸಿ
ವಾಮ ಮಾರ್ಗವ ಹಿಡಿಯುತಿಹೆವು ಇವುಗಳ ಬಯಸಿ
ಮನವ ಕೆಡಿಸಿಕೊಂಡಿಹೆವು ಸ್ವಾರ್ಥದ ಗುಣವ ಬೆಳಸಿ
ಮರೆಯುತಿಹೆವು ಭಾವನೆಗಳ ಮಧದಿಂದ ಕಡೆಗಣಿಸಿ
ಹೊನ್ನಕೂಡಿಡುವ ಆಸೆಯಲಿ ಪರಧನವ ಕಸಿಯದಿರು
ಸುಖ ಪಡೆವ ಕೀಳಾಸೆಯಲಿ ಪರಸತಿಯ ಬಯಸದಿರು
ಭೂಮಿಗೆ ಒಡೆಯನಾಗಿ ಮೆರೆಯುವ ಕನಸ ಕಾಣದಿರು
ಶ್ರೀನರಹರಿಯನು ಮರೆತು ಗರ್ವದಲಿ ಮೆರೆಯದಿರು
ನಾನು, ನನ್ನದೆನುವ ಸ್ವಾರ್ಥವನು ತೊರೆದು ಬಾಳ್ವೆಯ ನೀ ನಡೆಸು
ಮಾಯೆಗೊಳಗಾಗಿ ಗೈದ ತಪ್ಪುಒಪ್ಪುಗಳನೆಲ್ಲ ಶ್ರೀ ನರಸಿಂಹಗರ್ಪಿಸು
No comments:
Post a Comment