ಭೂತ, ಭವಿಷ್ಯದ ಚಿಂತೆ (ಶ್ರೀನರಸಿಂಹ 22)
ರಚನೆ : ಸತೀಶ್ ತುಮಕೂರು
ಶ್ರೀ ಲಕ್ಷ್ಮೀ ನರಸಿಂಹ ಆವಲಗುಡ್ಡ ಚಿಕ್ಕಬಳ್ಳಾಪುರ
ಕಳೆದು ಹೋಗಿಹ ಕಾಲವನು ಕುರಿತು ಚಿಂತಿಸದಿರು
ಕೈ ಮೀರಿ ಹೋಗಿರುವುದದ ನೆನೆದು ಮರುಗದಿರು
ಭವಿಷ್ಯದ ಚಿಂತೆಯಲಿ ಕಾಲವ ಕಳೆವುದದು ತರವಲ್ಲ
ಮುಂದೆ ನಡೆಯುವುದು ಏನೆಂಬುದರರಿವು ನಮಗಿಲ್ಲ
ಕಳೆಯುತಿಹುದಾಯುಷ್ಯ ದಿನಗಳೆಂಬುದು ಕಳೆದಂತೆ
ವ್ಯರ್ಥದಲಿ ಕಳೆಯದಿರು ಬಾಳ,ಮಾಡುತಲಿ ಚಿಂತೆ
ಮೋಹ, ಬಯಕೆಗಳೆ ಕಾರಣವು ಎಲ್ಲ ಚಿಂತೆಗಳಿಗೆ
ಸಿಲುಕಿಸದಂತಿರಿಸಬೇಕಿದೆ ಮನವ ಇವುಗಳ ಸುಳಿಗೆ
ನಡೆದ,ನಡೆಯುತಿಹ,ನಡೆಯುವುದೆಲ್ಲವೂ ಅವನ ಇಚ್ಛೆಗನುಸಾರ
ಎಲ್ಲರನು ಸಲಹುತಿಹ ಶ್ರೀನರಸಿಂಹ ಆಗಿಹನು ಈ ಜಗಕೆ ಆಧಾರ
No comments:
Post a Comment