ರಚನೆ :ಸತೀಶ ತುಮಕೂರು
ಹಿಂದೆ ನೋಡೊಮ್ಮ ನೀ,ಏನ ಸಾಧಿಸಿಹೆ ಜೀವನದಲ್ಲಿ
ಶೂನ್ಯವೆ ತುಂಬಿಹುದು,ಬರಿದೆ ಕಾಲಕಳೆದಿಹೆ ನೀ ಇಲ್ಲಿ
ಹಣೆಬರಹವೆ ಕಾರಣವೆನುತ ದೂಷಿಸುತಲಿ ಎಲ್ಲದಕು
ಸಂತೆಯೊಳು ಸುಮ್ಮನೆ ತಿರುಗಿದಂತಾಗಿಹುದಿ ಬದುಕು
ಕಳೆದ ಕಾಲವದು ಮರಳಿ ಬಾರದು ನೀ ಚಿಂತಿಸಿದರು
ಆತ್ಮ ಸಾಕ್ಷಾತ್ಕಾರ ಸಾಧನೆಯೆಡೆಗಡಿಯಿಡಿನ್ನಾದರು
ಹಣೆಬರಹವೆಂಬುದು ಇದ್ದಂತೆ ಇರಲಿ ಚಿಂತೆಯ ಬಿಡು
ಪ್ರಾಪ್ತ ಕರ್ಮಗಳ ಮಾಡುತ,ಶ್ರೀಹರಿ ಧ್ಯಾನ ಮಾಡು
ಸ್ಮರಿಸು ಇನ್ನಾದರೂ ಅನವರತ ಇಷ್ಟದೈವದ ನಾಮವನು
ಜಪಿಸಲು ತೋರುವನು ಶ್ರೀನರಸಿಂಹ ಮುಕ್ತಿ ಮಾರ್ಗವನು
No comments:
Post a Comment