ಕರ್ಮಾಗ್ನಿ (ಶ್ರೀ ನರಸಿಂಹ 52)


ಅರಿಯದಲೆ ಮುಟ್ಟಿದರು  ಅಗ್ನಿಯೆಂಬುದನು ನೀನು
ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು
ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು
ಗುಣವದರದು ತಿಳಿ,ಸುಡುವುದದು ಮುಟ್ಟಿದವರನು

ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು
ನೀಡುವುದದು ನೀ ಬಯಸದಿಹ ಕೆಡುಕಿನ ಪಲಗಳನು
ಅರಿಯದೆ ಆಗಿಹ  ಅಹಿತಕೆ ಕ್ಷಮೆಯೂ ದೊರಕಿದರು
ಅರಿತು  ಮಾಡುವ ಅಹಿತಕೆ ಕ್ಷಮೆಯಿಲ್ಲ ಕೋರಿದರು

ಮಾಡದಿರು ಕರ್ಮಗಳ ಜಗದಿ ಪರರ ಮನ ನೋಯಿಸಲು
ಇದುವೆ ಸುಲಭ ಮಾರ್ಗವು ಶ್ರೀನರಸಿಂಹನನು ಮೆಚ್ಚಿಸಲು

No comments:

Post a Comment