ಉಪದೇಶ-ಪಾಲನೆ


 ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ
ಅದ ಪಾಲಿಸುವವವರಿಂದು  ಮರೆಯಾಗುತಿಹರಲ್ಲ
ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ
ಒಳಗೆ  ಮನಸಲಿ ತುಂಬಿಹುದು ನೂರೆಂಟು  ಕಾಮ

ದಾಸರಂದರು  ಅಂದು  ಸತ್ಯವಂತರಿಗಿದು ಕಾಲವಲ್ಲ
ಸೋಜಿಗವು ಸತ್ಯವಂತ  ನಾನೆಂದುಕೊಳ್ಳುವೆವು ಎಲ್ಲ
ನಮ್ಮೊಳು ತುಂಬಿಹ ದೃಷ್ಟತನವ ಅರಿಯಬೇಕಿಹುದು
ಅದನಳಿಸಿ ಸಾತ್ವಿಕತೆಯ ಮನದಿ ಬೆಳಸಬೇಕಿಹುದು

ಉಪದೇಶಿಸುವ ಮುನ್ನ ನೀ ಅಳವಡಿಸಿಕೋ ಉಪದೇಶವನು
ಮೆಚ್ಚುವನು ಶ್ರೀ ನರಸಿಂಹ ವಿನಯ ತುಂಬಿರುವ ಮನಸನು

No comments:

Post a Comment