ಕಣ್ಣಿಗೆ ಕಾಣನು, ಸ್ಪರ್ಶಕೆ ಸಿಲುಕನು ದೇವನೆನದಿರು
ಅವನಿರುವಿಕೆಯನೆ ಸಂಶಯದಲಿ ನೀ ಜರಿಯದಿರು
ದೇವನಿರುವಿಕೆ ಕಂಡವರಾರಿಹರೆಂದು ನೀ ಕೇಳದಿರು
ವೇಧ,ಪುರಾಣಗಳು ಬರಿಯ ಕಟ್ಟು ಕಥೆಗಳೆನ್ನದಿರು
ಕಂಡು,ಮುಟ್ಟಿರುವೆಯೇನು ನಿನ್ನ ಪೂರ್ವಜರ ನೀನು
ನಂಬುವುದಿಲ್ಲವೆ ನೀ ಕಂಡು,ಮುಟ್ಟಿದವರ ಮಾತನು
ಸಾಧಕರ ಅನುಭವದ ನುಡಿಗಳಂತೆ,ನೀ ನಂಬಬೇಕು
ಸಾಧನೆ ಮಾಡಿ ನೀ ದೈವಾನುಭವವ ಪಡೆಯಬೇಕು
ಮನಸಿನ ನಂಬಿಕೆಯೆಂಬುದದು ಸಾದನೆಗೆ ಬಹು ದೊಡ್ಡ ಶಕ್ತಿ
ನೀಡುವನು ದರ್ಶನಾನುಭವವ ಇಡು ಶ್ರೀ ನರಸಿಂಹನಲಿ ಭಕ್ತಿ
No comments:
Post a Comment